Ramachandra Gandhi: Philosopher and Friend

ಈವತ್ತಿನ ರಾಜಕಾರಣದಲ್ಲಿ ನಾನು ಮತ್ತು ನೀವು

ಇವತ್ತು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಹೇಗೆ ಸಾಧ್ಯವಾಯಿತು? ಈಗ ಬಿಜೆಪಿಯನ್ನು ವಿರೋಧಿಸುತ್ತ ಇರುವ ಶ್ರೀ ದೇವೇಗೌಡರೂ ಸೇರಿಕೊಂಡಂತೆ ಪಕ್ಷೇತರ ರಾಜಕೀಯ ಚಿಂತಕರಾಗಿ ಬಿಜೆಪಿಯನ್ನು ಅನೈತಿಕವೆಂದು ತಿಳಿಯುವ ನನ್ನಂಥವರ ಪಾಲೂ ಇದರಲ್ಲಿ ಎಷ್ಟು ಇದೆ ಎನ್ನುವುದನ್ನು ಸತ್ಯ ನಿಷ್ಠುರವಾಗಿ ನೋಡುವುದು ಈ ಲೇಖನದ ಉದ್ದೇಶ.

ನನಗೆ ನೆನಪಿದೆ: ಬಹಳ ಹಿಂದೆ ಲೋಹಿಯಾ ಹೇಳಿದ್ದ ಮಾತು: `ನಾನು ಪಾಕಿಸ್ತಾನದ ವಿರೋಧಿ; ಆದರೆ ಮುಸ್ಲಿಮರ ಸ್ನೇಹಿತ. ಆರ್.ಎಸ್.ಎಸ್ ಪಾಕಿಸ್ತಾನದ ಪರ; ಆದರೆ ಮುಸ್ಲಿಮರ ಶತ್ರು'. ಇಂತಹ ಜಾಣವೆಂದು ಕಾಣುವ ಲೋಹಿಯಾ ಮಾತುಗಳ ಹಿಂದೆ ಅವರು ನಂಬಿದ ತತ್ವ ಇತ್ತು. ಆರ್.ಎಸ್.ಎಸ್ ಮತ್ತು ಪಾಕಿಸ್ತಾನದ ನಾಯಕರು ಮತಾಧಾರಿತ ವ್ಯವಸ್ಥೆಯ ಅಧಿಕಾರದಲ್ಲಿ ನಂಬಿದವರು. ತಾತ್ವಿಕವಾಗಿ ಇಬ್ಬರ ನೆಲೆಯೂ ಒಂದೇ. ಆದರೆ ತಾನು ಮತಾಧಾರಿತ ವ್ಯವಸ್ಥೆಯ ವಿರೋಧಿ; ಅದು ಇಸ್ಲಾಂ ಪ್ರಣೀತವಿರಲಿ, ಹಿಂದೂ ಪ್ರಣಿತವಿರಲಿ- ಎರಡೂ ತನ್ನ ಪಾಲಿಗೆ ದುಷ್ಟ ವ್ಯವಸ್ಥೆಗಳೇ. ಲೋಹಿಯಾ ಕೊನೆತನಕ ಹೀಗೆ ನಂಬಿದ್ದವರು; ಆದರೆ ಸದ್ಯದಲ್ಲಿ ಸಲ್ಲುವ ತಂತ್ರಗಾರಿಕೆಯಲ್ಲಿ ಬಿಜೆಪಿ ಬೆಳೆಯಲೂ ಅಪ್ರತ್ಯಕ್ಷವಾಗಿ ಕಾರಣರಾದವರು. ಜಾರ್ಜ ಫರ್ನಾಂಡೀಸರ ಆಲೋಚನಾಕ್ರಮದಲ್ಲಿ, ಮನೋವಿಕಾರವೆನ್ನಿಸುವಷ್ಟು ತೀವ್ರವಾದ ನೆಹರೂ ಸಂತಾನದ ಅವರ ದ್ವೇಷದ ಹಿಂದೆ ಇಡಿಯಾದ ಲೋಹಿಯಾ ಇಲ್ಲದಿರಬಹುದು; ಆದರೆ ವ್ಯಂಗ್ಯಗೊಳಿಸಬಲ್ಲ ಲೋಹಿಯಾ ವಿಚಾರದ ಅಣಕು ಚಿತ್ರ ಜಾರ್ಜ್ ಫರ್ನಾಂಡೀಸರಲ್ಲಿ ಇದೆ. ನಾನು ಹಿಂದೆ ತುಂಬ ಮೆಚ್ಚಿದ್ದವರ ಬಗ್ಗೆ ಒಲ್ಲದ ಮನಸ್ಸಿನಿಂದ ಹೇಳುವ ಮಾತು ಇದು.

ಆದರೆ ತನ್ನ ನೆಹರೂ ವಿರೋಧದಲ್ಲಿ  ಲೋಹಿಯಾ ಕಾಂಗ್ರೆಸ್‌ಗೆ ಒಂದು ಪ್ರತಿಪಕ್ಷ ಕಟ್ಟುವುದರಲ್ಲೂ ತೊಡಗಿದವರಾಗಿದ್ದರು. ಅವರ ಮೊದಲಿನ ಹಲವು ಪ್ರಯೋಗಗಳು ಭಾರತದಂತಹ ವಿಶಾಲವಾದ ದೇಶದಲ್ಲಿ ಕತ್ತಲನ್ನು ಅಲ್ಲಲ್ಲಿ ಬೆಳಗುವ ಮಿಣುಕುಹುಳಗಳಾಗಿ ಮಾತ್ರ ಗೋಚರಿಸಿದುವು. ಜನರ ಕಣ್ಣಿಗೆ ಕಾಂಗ್ರೆಸ್ ಒಂದು ಸ್ಥಿರವಾದ ಬದಲಾಗದ ಶಿಲೆಯಂತೆ ಕಾಣುವುದನ್ನು ತಪ್ಪಿಸುವುದು ಹೇಗೆ ಎಂಬ ಚಿಂತನೆಯಲ್ಲಿ ಲೋಹಿಯಾ ತೊಡಗಿದ್ದರು. ಹೀಗೆ ತೊಡಗಿದಾಗ ಅವರಿಗೆ ಸ್ಥೂಲವಾಗಿ ಅನಿಸಿದ್ದು ಹೀಗೆ: ಕಾಂಗ್ರೆಸ್‌ನಲ್ಲಿ ಎಲ್ಲ ಬಗೆಯ ವಿಚಾರದವರೂ ಇದ್ದಾರೆ. ಬಂಡವಾಳಶಾಹಿ ಪರವಾದವರು ಇದ್ದಾರೆ, ಸಮಾಜವಾದಿಗಳಿದ್ದಾರೆ, ಹಿಂದೂ ಮತೀಯವಾದಿಗಳಿದ್ದಾರೆ, ಹೀಗೆ ಕಾಂಗ್ರೆಸ್ ಎಲ್ಲವನ್ನೂ ಒಳಗೊಂಡ ಹಿಂದೂ ಧರ್ಮದ ಹಾಗೆಯೇ ಇದೆ. ಗಾಂಧೀಜಿಯವರು ಸಾಯುವ ಮುಂಚೆ ಈ ಕಾಂಗ್ರೆಸ್ಸನ್ನು ಬರಕಾಸ್ತುಗೊಳಿಸಿ; ಬೇರೆ ಬೇರೆ ರಾಜಕೀಯ ಪಕ್ಷಗಳು ತಾವಾಗಿಯೇ ಹುಟ್ಟಿಕೊಳ್ಳಲಿ; ಕಾಂಗ್ರೆಸ್ಸಿಗೆ ಈ ದೇಶವನ್ನು ಆಳುವ ಗೊಡವೆ ಬೇಡ; ಅದು ಉಳಿಯುವುದಾದರೆ ಸಮಾಜ ಸೇವಾ ಸಂಸ್ಥೆಯಾಗಿ ಉಳಿಯಲಿ ಎಂದು ತಮ್ಮ ವಿಲ್‌ನಲ್ಲಿ ಬರೆದಿಟ್ಟಿದ್ದರು. ಅದನ್ನು ಕಾಂಗ್ರೆಸ್ ಪಾಲಿಸಿದ್ದರೆ ಸ್ವಾತಂತ್ರ್ಯದ ನಂತರ ನೆಹರು ಅವರದ್ದೇ ಒಂದು ಸಮಾಜವಾದೀ ಚಿಂತನೆಯ  ಪಕ್ಷ ; ಇರುವ ವ್ಯವಸ್ಥೆಯ ಮುಂದುವರಿಯಕೆಯಲ್ಲಿ ನಂಬಿಕೆ ಇರುವ ಸರದಾರ್ ಪಟೇಲ್, ಬಾಬೂ ರಾಜೇಂದ್ರ ಪ್ರಸಾದ್, ರಾಜಾಜಿಯಂಥವರದ್ದೇ ಒಂದು conservative ಪಕ್ಷ;ultra conservative ಆದ ಹಿಂದು ಸಾವರ್ಕರ್ ಪ್ರೇರಿತ ರಾಷ್ಟ್ರವಾದೀ ಪಕ್ಷವಾದ ಜನಸಂಘ-- ಇಂತಹ ಪಕ್ಷಗಳು ಹುಟ್ಟಿಕೊಂಡು, ಈ ಪಕ್ಷಗಳಲ್ಲಿ ಕಾಂಗ್ರೆಸ್‌ನವರು ತಮ್ಮ ವಿಚಾರಕ್ಕೆ ತಕ್ಕಂತೆ ಹಂಚಿಕೊಂಡು,  ಭಾರತೀಯ ಪ್ರಜಾತಂತ್ರ ವ್ಯವಸ್ಥೆ ಈಗಿನ ಗೊಂದಲವಿಲ್ಲದೆ ಬೆಳೆಯುತ್ತಿತ್ತೇನೋ?  read more »

ಪೊನ್ನಮ್ಮಾಳ್ ಎಂಬ ಸಮಾಜವಾದೀ ದೇವತೆ

ಶಿವಮೊಗ್ಗದ ಸಮಾಜವಾದೀ ಕುಟುಂಬದಲ್ಲಿ ಕೆಲವರಿಗೆ ಅಕ್ಕನಂತೆಯೂ ನಮ್ಮಂಥ ಎಳೆಯರಿಗೆ ತಾಯಿಯಂತೆಯೂ ಇದ್ದ ಪೊನ್ನಮ್ಮಾಳ್ ನಿಧನ ನನ್ನ ಮಟ್ಟಿಗೆ ಅತೀವ ದುಃಖದ ಸಂಗತಿ. 

ನಮ್ಮ ಎಲ್ಲ ಚಳವಳಿಗಳಲ್ಲೂ ಭಾಗವಹಿಸುತ್ತಿದ್ದ ಮೊದಲನೇ ಮಹಿಳೆಯೆಂದರೆ ಪೊನ್ನಮ್ಮಾಳ್. ಚಳವಳಿಗಳಲ್ಲಿ ಮಾತ್ರವಲ್ಲ ನಮ್ಮ ಗಾಢವಾದ ತಾತ್ವಿಕ ಚರ್ಚೆಯಲ್ಲೂ ಅವರು ಪಾಲುದಾರರು. ಆದರೆ ಸ್ವಂತದ್ದಾದ ಯಾವ ರಾಜಕೀಯ ಆಸೆಯೂ ಅವರಿಗಿರಲಿಲ್ಲ. ಕನ್ನಡದ ಅನೇಕ ಮಹತ್ವದ ಲೇಖಕರಂತೆಯೇ ಪೊನ್ನಮ್ಮಾಳ್ ಮನೆಯಲ್ಲಿ ಕನ್ನಡ ಮಾತನಾಡದಿದ್ದರೂ ಸಂಪೂರ್ಣ ಕನ್ನಡಿಗರೇ ಆಗಿದ್ದವರು. ನಮಗೆ ಯಾರು ಯಾವ ಜಾತಿ ಇತ್ಯಾದಿ ಕುತೂಹಲಗಳೂ ಇಲ್ಲದಿದ್ದಾಲದಲ್ಲಿ ಪೊನ್ನಮ್ಮಾಳ್ ನಮ್ಮವರಾದರು.  read more »

ಸಬಕೋ ಸನ್ಮತಿ ದೇ ಭಗವಾನ್

ಪ್ರಾರ್ಥನೆಯಲ್ಲಿ ತೊಡಗಿರುವವರ ಮೇಲೆ-ಅವರು ಯಾವ ದೇವರಲ್ಲಿ ಪ್ರಾರ್ಥಿಸುತ್ತಿದ್ದರೂ-ದಾಳಿ ಮಾಡುವುದು ಅನಾಗರಿಕ ಮಾತ್ರವಲ್ಲ, ಅಧಾರ್ಮಿಕ ಕೂಡ. ಆದರೆ ಧರ್ಮ ರಕ್ಷಣೆಯ ಹೆಸರಿನಲ್ಲೇ ಸಂಘ ಪರಿವಾರದ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರ್ಥನೆಯಲ್ಲಿ ತೊಡಗಿರುವವರ ಮೇಲೆ ದಾಳಿ ನಡೆಸಿದ್ದಾರೆ. 'ಯಾವ ದೇವರನ್ನು ಪ್ರಾರ್ಥಿಸಿದರೂ ಅದು ಕೇಶವನನ್ನು ತಲುಪುತ್ತದೆ' ಎಂದು ನಂಬುವ ಹಿಂದೂ ಆದವನು ಹೀಗೆ ವರ್ತಿಸುವುದು ಹೇಯವಾದುದ್ದು. ಇಂಥ ದಾಳಿಗಳು ಹಿಂದೂ ನಾಗರಿಕತೆಯನ್ನು ನಾಶಗೊಳಿಸುತ್ತಿವೆ.

 

ಕ್ರೈಸ್ತರು ಹೊಸಗನ್ನಡದ ಅಭಿವೃದ್ಧಿಗೆ ತಮ್ಮದೇ ಆದ ಕಾಣಿಕೆಗಳನ್ನು ನೀಡಿದ್ದಾರೆ. ರೆವೆರೆಂಡ್ ಫಾದರ್ ಫರ್ಡಿನಾಂಡ್ ಕಿಟೆಲ್ ಮೊದಲ ಕನ್ನಡ ನಿಘಂಟನ್ನು ರಚಿಸಿದವರು. ಕರ್ನಾಟಕದ ಅಭಿವೃದ್ಧಿಯಲ್ಲಿಯೂ ಕ್ರೈಸ್ತರ ಪಾತ್ರ ಅನನ್ಯ. ಸರಕಾರ ತಲುಪಲೂ ಆಗದಿರುವ ಅನೇಕ ಕಡೆಗಳಲ್ಲಿ ಅವರು ಈಗಲೂ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ.

ಈಗ ಕರ್ನಾಟಕದಲ್ಲಿ ನಡೆಯುತ್ತಿರುವುದು ಅಧಿಕಾರದಲ್ಲಿರುವ ಸರಕಾರದ ಚುನಾವಣಾ ಸಿದ್ಧತೆಯ ಸಿನಿಕ ತಂತ್ರವಲ್ಲದೆ ಬೇರೇನೂ ಅಲ್ಲ. ನಮ್ಮ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ತಕ್ಷಣ ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡುವುದಾಗಿ ಹೇಳಿದ್ದರು. ಅಂದರೆ ಅವರಿಗೆ ಗುಜರಾತ್‌ನ ನರೇಂದ್ರ ಮೋದಿಯೇ ಆದರ್ಶ. ನಾನು ಹುಟ್ಟಿ ಬೆಳೆದ ಜಿಲ್ಲೆಯವರೇ ಆಗಿರುವ ರೈತ ನಾಯಕ ಬಿ.ಎಸ್ ಯಡಿಯೂರಪ್ಪ ಈಗ ಕರ್ನಾಟಕದ ಮೋದಿಯಾಗಲು ಹೊರಟಿದ್ದಾರೆ.! ಕುವೆಂಪು, ಶಾಂತವೇರಿಯಂತಹವರನ್ನು ಪಡೆದ ಜಿಲ್ಲೆಯಲ್ಲಿ ಬೆಳೆದ ನಮ್ಮ ಯಡ್ಯೂರಪ್ಪನವರು ಹೀಗಾಗಿರುವುದು ಒಂದು ದುರಂತ ."  read more »

Sangha Parivar is destroying the Hindu civilization.

What has happened is a shame; the Christians in the past had made contribution to the development of modern Kannada. Rev Kittel who composed the first Kannada dictionary was one of our revered ancestors. The Christians  continue to run hospital and schools. Most of the gentle and caring  nurses in hospitals are Christians.

What is happening now is a cynical move on the part of the government in power. Our CM had said that he will make Karnataka another Gujerath. His ideal seems to be Modi, for Sri Yedyurappa once a leader of the poor peasants in my home district Shimoga now speaks of Modi style development. The BJP knows that they cant get the Christian minority votes in Mangalore and Udupi, as they are trditional supporters of the Congress. By attacking Christians now they can make a solid Hindu vote Bank. This is most cynical.  read more »

ಶೌರಿ ಎಂಬ ರುಜು: ಶಾರದಾ ಪ್ರಸಾದ್ ಕುರಿತು ಒಂದು ಸ್ವಗತ

ಹೆಚ್. ವೈ. ಶಾರದಾ ಪ್ರಸಾದ್

ಇವರು ನನಗೆ ಸುಮಾರು ಅರವತ್ತೈದು ವರ್ಷಗಳ ಕೆಳಗೆ `ಶೌರಿ' ಎಂದು ಅಕ್ಷರಗಳಲ್ಲಿ ಕಂಡವರು. ಅವರ ತಂದೆ ವಿದ್ವಾನ್ ಯೋಗಾನರಸಿಂಹನ್ಆಗ ನನ್ನ ತೀರ್ಥಹಳ್ಳಿ ಹೈಸ್ಕೂಲಿನ ಮುಖ್ಯೋಪಾಧ್ಯಾಯರು. ನನ್ನ ಮೊದಲ ನಿಜವಾದ ಗುರುಗಳು. ಅವರ ಮನೆಗೆ ನೆಹರೂ ಮತ್ತು ಗಾಂಧಿಯವರು ಬರೆದ ಪುಸ್ತಕಗಳನ್ನು ಓದಲೆಂದು ಪಡೆಯಲು ಹೋಗುತ್ತ ಇದ್ದೆ. ಪ್ರತಿ ಪುಸ್ತಕದ ಒಳ ಪುಟದಲ್ಲಿ `ಶೌರಿ' ಎಂಬ ನೀಟಾದ ಸಹಿ ಇರುತ್ತಿತ್ತು. ಶೌರಿ ನನ್ನ ಗುರುಗಳ ಮಗನೆಂದೂ ಈ ಎಲ್ಲ ಪುಸ್ತಕಗಳನ್ನೂ ಕೊಂಡು ಓದಿ ತಂದೆಗೆ ಕೊಟ್ಟವರೆಂದೂ ಮಾತ್ರ ನನಗೆ ಆಗ ಗೊತ್ತಿದ್ದದ್ದು.

ಈ `ಶೌರಿ'ಯೇ ಶಾರದಾ ಪ್ರಸಾದರೆಂದು ತಿಳಿದಮೇಲೆ, (ಭಾರತ ಸ್ವತಂತ್ರ ದೇಶವಾದ ನಂತರ) ಹಲವು ಕಥೆಗಳನ್ನು ಅವರ ಬಗ್ಗೆ ಕೇಳಿದ್ದೆ. 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದವರು ಇವರು. ಜೈಲಿಗೆ ಹೋದವರು ಇವರು. ಜೈಲಿನಲ್ಲಿ ಇದ್ದಾಗಲೇ ಪರೀಕ್ಷೆ ತೆಗೆದುಕೊಳ್ಳಲು ಅನುಮತಿ ಪಡೆದು ಇಂಗ್ಲಿಷ್ ಆನರ್ಸ್ನಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದವರು ಇವರು-ಹೀಗೆ.  read more »

ಸಾಮಾನ್ಯ ಸಂಸಾರಿಗಳ ನಿತ್ಯದ ಶ್ರುತಿ

ಗಿರೀಶ ಕಾಸರವಳ್ಳಿಯವರ ಗುಲಾಬಿ ಟಾಕೀಸ್ ಅವರ ಉಳಿದೆಲ್ಲ ಸಿನಿಮಾಗಳಿಗಿಂತ ಭಿನ್ನವಾದುದು. ಈ ಭಿನ್ನತೆ ಮುಖ್ಯವಾಗಿ ಕಾಣಿಸಿಕೊಳ್ಳುವುದು ಚಿತ್ರ ಕಥನದ ಹೆಣಿಗೆ ಮತ್ತು ವಿನ್ಯಾಸದಲ್ಲಿ. ಒಂದು ಸಿನಿಮಾವನ್ನು ನಾವು ನೋಡುವಾಗ ಮುಂದೇನಾಗುತ್ತದೆ ಎಂಬುದೇ ನಮಗೆ ಮುಖ್ಯವಾದರೆ ನಾವು ನೋಡುವ ಬಗೆ ಬೇರೆ. ಹಾಗೆಯೇ ಮುಂದೇನಾಗುತ್ತದೆ ಎಂಬುದು ಅಮುಖ್ಯವಾದರೆ ನಾವು ನೋಡುವ ಬಗೆ ಬೇರೆ. ಸಸ್ಪನ್ಸೇ ಮುಖ್ಯವಾಗಿ ಬಿಟ್ಟರೆ, ನಾಟಕೀಯತೆ ಮುಖ್ಯವಾಗಿ ಸಿನಿಮಾ ತನ್ನ ಶಿಖರ ಸ್ಥಿತಿಯಲ್ಲಿ ಚೂಪಾಗುವ ಚುರುಕಿನಲ್ಲಿ ಪಿರಾಮಿಡ್ನಂತೆ ಮೇಲೇರುತ್ತದೆ. ಆದರೆ ಈ ಸಿನಿಮಾದಲ್ಲಿ ಮುಂದೇನು ಎನ್ನುವುದು ಅಷ್ಟು ಮುಖ್ಯವಲ್ಲ. ಆದ್ದರಿಂದ ಹೆಣಿಗೆಯಲ್ಲಿ ಒಂದು ಅದ್ಭುತವಾದ ಅಲ್ಲಲ್ಲೇ ಸಲ್ಲುವ ಸಾಂಧ್ರತೆ ಇದೆ. ಸಿನಿಮಾದಲ್ಲಿ ನಾವು ಕಾಣುವುದೆಲ್ಲ ಮನಸ್ಸಿಗೆ ಇಳಿದು ಕಾಡುತ್ತವೆ. ವೈಚಾರಿಕವಾಗಿಯಲ್ಲ; ಅನ್ಯೋಕ್ತಿಯನ್ನು (ಅಲಿಗರಿಯನ್ನು) ನಾವು ಬಗೆಯುವ ರೀತಿಯಲ್ಲಿ ಅಲ್ಲ; ಬದಲಿಗೆ ಕಂಡದ್ದನ್ನೇ ಅದರಲ್ಲಿ ಇಣುಕುವ ಒಳಾರ್ಥಗಳನ್ನು ಹೊಳೆಸಿಕೊಳ್ಳಲೆಂದು, ಕಂಡದ್ದರಲ್ಲಿ ತಂಗುವಂತೆ ಮಾಡುವ ಧ್ಯಾನಶೀಲ ಮನಸ್ಥಿತಿಯಲ್ಲಿ.  read more »

Syndicate content