1. This pro-people and boldly drafted manifesto deserves wide-rangin support in Karnataka and needs to be debated all over the country in preparation of the next General Elections.
2. Agenda Item No. 1: Putting a stop to mining (of not just iron, but all other ores as well) for exports will necessitate a complete review of the huge mining contracts signed with multi-national corporations during the recent decades under terms and conditions that amount to a total sell-out of India's rich natural resources to foreign capital.
3. Agenda Item No. 2: The long-pending demand for Common School System will be seen by the masses as a major political agenda if it shall,
read more »
1. Reservations for dalits, adivasis and other backward castes in educational institutions has been an important policy to implement the affirmative action that our Constitution guarantees. Despite limitations and problems, the policy has succeeded in enhancing the educational status of these social groups, and their representation in public sector jobs, which in turn has meant both social and economic mobility for them. Considering that these groups are still far from being close to other groups either in education or in employment status, it is important that the policy continues. Also, in view of the relatively lower status of Muslims as compared to other religious or social groups, it is desirable to extend this action to them. read more »
ಇದು ಜನತಾ ಪ್ರಣಾಳಿಕೆಯ ಕರಡು. ಓದಿ, ನಿಮಗೇನಾದರೂ ಸೇರಿಸಬೇಕನ್ನಿಸದರೆ ಅದನ್ನು ಪ್ರತಿಕ್ರಿಯೆಯಾಗಿ ದಾಖಲಿಸಿ.
1. ಅದಿರನ್ನು ಮಾರುವ ಗಣಿಗಾರಿಕೆ ನಿಲ್ಲಬೇಕು; ನಮ್ಮ ಎಲ್ಲ ರಾಜಕೀಯ ಪಕ್ಷಗಳನ್ನು ಈ ಗಣಿಗಾರಿಕೆ ಭ್ರಷ್ಟಗೊಳಿಸಿದೆ.
2. ಎಲ್ಲ ಮಕ್ಕಳಿಗೂ ಹತ್ತನೆಯ ಇಯತ್ತೆಯ ತನಕವಾದರೂ ಉತ್ಕೃಷ್ಟ ಗುಣಮಟ್ಟದ ಸಾಮಾನ್ಯ ಶಾಲೆಗಳು (Common school) ಗಳಲ್ಲಿ ಶಿಕ್ಷಣ ದೊರೆಯಬೇಕು. ಮಕ್ಕಳಲ್ಲಿ ಬೇಧವೆಣಿಸಬಾರದು.
3. ನಮ್ಮ ನಗರಗಳು ಬೆಳೆಯುವಾಗ ವೃದರಿಗೂ, ಮಕ್ಕಳಿಗೂ, ಅಂಗವಿಕಲರಿಗೂ ಈ ನಗರಗಳಲ್ಲಿ ಬದುಕುವುದು ಆಹ್ಲಾದಕರವಾಗಿರುವಂತೆ ಬೆಳೆಸಬೇಕು. ಎಲ್ಲೆಲ್ಲೂ ಸಾರ್ವಜನಿಕ ಉದ್ಯಾನಗಳು, ಗ್ರಂಥಾಲಯಗಳು, ರಸ್ತೆಗಳನ್ನು ದಾಟಲು ಮುಕ್ತ ಅವಕಾಶಗಳು, ಸೈಕಲ್ನಲ್ಲಿ ಓಡಾಡುವವರಿಗೆ ಅವರದೇ ಮಾರ್ಗಗಳು ಇರಬೇಕು.
4. ಬಡಪಾಯಿಗಳಾದರೂ ಆತ್ಮಗೌರವ ಕಳೆದುಕೊಳ್ಳದ ಅಲ್ಪಸಂಖ್ಯಾತ ಜನಸಮುದಾಯದವರಿಗೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸಗಳನ್ನು ಪಡೆಯುವುದಕ್ಕೆ ಅಗತ್ಯವಾದ ಶಿಕ್ಷಣವನ್ನು ಕೊಡಬೇಕು; ಅವರಿಗೆ ಮೀಸಲಾತಿ ಇರಬೇಕು.
5. ಈಗಾಗಲೇ ಮೀಸಲಾತಿಯ ಸೌಲಭ್ಯ ಪಡೆದವರ ಮಕ್ಕಳಿಗೆ ಮೀಸಲಾತಿ ಬೇಕಾಗಿಲ್ಲ; ಬದಲಾಗಿ ಆ ವರ್ಗಗಳ ಸಮುದಾಯದಲ್ಲಿ ಈ ವರೆಗೆ ಏನೂ ಸಿಗದವರಿಗೆ ಈ ಮೀಸಲಾತಿಯನ್ನು ನೀಡಬೇಕು
6. ವೋಟುಗಳನ್ನು ಗಿಟ್ಟಿಸಿಕೊಳ್ಳಲು ಕೋಮು, ಜಾತಿ ಮತ್ತು ಭಾಷೆಗಳ ನಡುವೆ ವೈಷಮ್ಯವನ್ನು ಉದ್ದೇಶಪೂರ್ವಕವಾಗಿ ಬೆಳೆಸುವ ಮಾಧ್ಯಮಗಳ ಲಾಭಕೋರತನದ ಹವಣಿಕೆಗಳಿಗೂ ರಾಜಕಾರಣಿಗಳ ಪ್ರಚಾರಗಳಿಗೂ ನಿರ್ಭಂಧಗಳಿರಬೇಕು.
7. ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ವಿಶೇಷ ಆರ್ಥಿಕ ವಲಯ (ಎಸ್ಇಜಡ್)ಗಳಿಗಾಗಿ ರೈತರಿಂದ ಪಡೆದುಕೊಳ್ಳವುದನ್ನು ನಿಲ್ಲಿಸಬೇಕು.
8. ರೈತರಿಗೆ ತಾವು ಬೆಳೆದದ್ದನ್ನು ಮಾರುವಾಗ ಅವರು ಬೆಳೆದುದಕ್ಕೆ ಯೋಗ್ಯವಾದ ಬೆಲೆ ಸಿಗುವಂತಾಗಬೇಕು.
9. ದೊಡ್ಡ ದೊಡ್ಡ ಮಾಲು (malls)ಗಳ ಬದಲು ಹಲವು ವ್ಯಾಪಾರಿಗಳು ನಡೆಸುವ ಸಣ್ಣ ಪುಟ್ಟ ದೊಡ್ಡ ಕಿರಾಣಿ ಅಂಗಡಿಗಳಿಗೆ ಪ್ರೋತ್ಸಾಹ ದೊರೆಯಬೇಕು
10. ಈ ಭೂಮಂಡಲದ ಶಾಖವನ್ನು ಹೆಚ್ಚುಸುತ್ತ ಎಲ್ಲ ಜೀವಿಗಳಿಗೂ ಮೃತ್ಯುಪ್ರಾಯವಾದ ಅಮೆರಿಕನ್ ಮಾದರಿಯ ಅಭಿವೃದ್ಧಿಗೆ ಬದಲಾಗಿ ಸರ್ವೋದಯದ ಪ್ರಗತಿ ನಮ್ಮ ಎಲ್ಲ ಕ್ರಿಯೆಗಳಲ್ಲೂ ವ್ಯಕ್ತವಾಗಬೇಕು.
11. ಸಾವಯವ ಕೃಷಿಗೂ, ಸೂರ್ಯಶಾಖದಿಂದ ಉತ್ಪಾದಿಸುವ ವಿದ್ಯತ್ತಿಗೂ, ಜಲ ಸಂರಕ್ಷಣೆಗೂ ಅಗತ್ಯವಾದ ಸಂಶೋಧನೆಗಳಿಗೆ ವಿಜ್ಞಾನದ ಲೋಕದಲ್ಲಿ ಆದ್ಯತೆ ಇರುವಂತೆ ನೋಡಿಕೊಳ್ಳಬೇಕು
read more »
ದಿಲ್ಲಿ ವಿಶ್ವವಿದ್ಯಾಲಯದ ಇತಿಹಾಸದ ಆನರ್ಸ್ ವಿದ್ಯಾರ್ಥಿಗಳಿಗೆ ಶಿಫಾರಸು ಮಾಡಲಾಗಿರುವ ಪಠ್ಯಗಳಲ್ಲಿ ಎ.ಕೆ.ರಾಮಾನುಜನ್ ಬರೆದಿರುವ `ತ್ರೀ ಹಂಡ್ರೆಡ್ ರಾಮಾಯಣಾಸ್-ಫೈವ್ ಎಗ್ಸಾಂಪಲ್ಸ್ ಅಂಡ್ ತ್ರೀ ಥಾಟ್ಸ್ ಆನ್ ಟ್ರಾನ್ಸ್ಲೇಷನ್' ಎಂಬ ಪ್ರಬಂಧವೂ ಒಂದು. ಇದು ಇತಿಹಾಸ ಪಠ್ಯದಲ್ಲಿ ಇರಕೂಡದು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ವಿಶ್ವವಿದ್ಯಾಲಯದಲ್ಲಿ ಗದ್ದಲವೆಬ್ಬಿಸಿದರು. ವಿಭಾಗ ಮುಖ್ಯಸ್ಥರನ್ನು ಎಳೆದಾಡಿದರು. ಪುಸ್ತಕವನ್ನು ಹರಿದು ಹಾಕಿದರು. ಇದಕ್ಕೆ ಕನ್ನಡ ಸಾಹಿತ್ಯಿಕ ಲೋಕದಿಂದ ಬಂದ ಪ್ರತಿಕ್ರಿಯೆ ಬಹುತೇಕ ಶೂನ್ಯ. ರಾಮಾನುಜನ್ ನಮ್ಮವರು, ಕನ್ನಡದವರು ಎಂಬ ಕಾರಣಕ್ಕಾದರೂ ಅವರ ಪುಸ್ತಕವನ್ನು ಹರಿದುದಕ್ಕೆ ಕನ್ನಡಾಭಿಮಾನಿಗಳಿಗೆ ಸಿಟ್ಟು ಬರಬೇಕಿತ್ತು. ಅದೂ ಸಂಭವಿಸಲಿಲ್ಲ. ಇದೇಕೆ ಹೀಗಾಯಿತು? ಬಹುಶಃ ನಾವು ಇಂಥ ವರ್ತನೆಗಳಿಗೆ ಒಪ್ಪಿಗೆ ಕೊಡಲು ಆರಂಭಿಸಿದ್ದೇವೆ ಅನ್ನಿಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಥದ್ದು ತುಂಬಾ ನಡೆಯುತ್ತಿದೆ. ರಾಜಶೇಖರ್, ಫಣಿರಾಜ್, ಪಟ್ಟಾಭಿಯಂಥ ಕೆಲವರು ಇಂಥದ್ದನ್ನು ವಿರೋಧಿಸುತ್ತಿದ್ದಾರೆ. ಮತ್ತು ಕೆಲವೇ ಕೆಲವು ಸಂಘಟನೆಗಳು ಇದನ್ನು ಬೆಂಬಲಿಸುತ್ತಿವೆ. ಈ ಬಗೆಯ ಹೋರಾಟಗಳೆಲ್ಲಾ ಹಾಸ್ಯಾಸ್ಪದವಾಗಿ ಕಾಣಿಸುವಂಥ ಒಂದು ಕಾಲವೂ ಹತ್ತಿರದಲ್ಲೇ ಇರಬಹುದೇನೋ ಎಂಬ ಭಯ ನನ್ನನ್ನು ಆವರಿಸುತ್ತಿದೆ. ಕಾಫ್ಕಾನ ಬರೆಹದಲ್ಲಿ ಒಬ್ಬ ಹಂಗರ್ ಆರ್ಟಿಸ್ಟ್ ಇದ್ದಾನೆ. ಊರಿಗೆ ಬಂದವರೆಲ್ಲಾ ಅವನನ್ನು ಹೋಗಿ ನೋಡಿ ಬರುತ್ತಿರುತ್ತಾರೆ. ಅಂದರೆ ಅವನೊಬ್ಬ ಪ್ರೇಕ್ಷಣೀಯ ವ್ಯಕ್ತಿ ಆಗಿಬಿಟ್ಟಿರುತ್ತಾನೆ. ನಮ್ಮ ಹೋರಾಟಗಳಿಗೆ, ಹೋರಾಟಗಾರರಿಗೆ ಈ `ಪ್ರೇಕ್ಷಣೀಯ ಸ್ಥಿತಿ' ಬರಬಾರದು ಎಂಬುದು ಲಂಕೇಶ್ ಹುಟ್ಟಿದ ದಿನ ನಾವು ಆಡಲೇಬೇಕಾದ ಮಾತು. ಇದನ್ನೇ ಹಿನ್ನೆಲೆಯಾಗಿಟ್ಟುಕೊಂಡು ರಾಜಕೀಯಕ್ಕೆ ಸಂಬಂಧಿಸಿದ ಕೆಲವು ಟಿಪ್ಪಣಿಗಳನ್ನು ಮುಂದಿಡುತ್ತಿದ್ದೇನೆ..
read more »
By U R Ananthamurthy - Posted on November 12th, 2007
ನಮ್ಮ ಎಲ್ಲ ಮಾಧ್ಯಮಗಳಲ್ಲೂ ಜನತಾದಳವು (ಜೆಡಿಎಸ್) ಭಾರತೀಯ ಜನತಾಪಕ್ಷಕ್ಕೆ ಅಧಿಕಾರವನ್ನು “ಹಸ್ತಾಂತರ” ಮಾಡುವುದೆಂದು ಕೇಳಿ ಕೇಳಿ ನಾವೆಲ್ಲರೂ ಒಂದು ಸುಳ್ಳಿನಲ್ಲಿ ಪಾಲುದಾರರಾಗುವಂತೆ ಆಗಿದೆ. ನಿಜಕ್ಕೂ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿಯೂ ಅಧಿಕಾರದಲ್ಲಿ ಇತ್ತು. ಮುಖ್ಯಮಂತ್ರಿಯ ಕೆಲಸ ಹೀಗೆ ಅಧಿಕಾರದಲ್ಲಿರುವ ಎರಡು ಪಕ್ಷಗಳನ್ನೂ ಪ್ರತಿನಿಧಿಸುವುದಲ್ಲದೆ ಇನ್ನೇನು ವೈಯಕ್ತಿಕವಾಗಿ ಹೆಚ್ಚಿನದನ್ನು ಮಾಡಬಹುದಾದ ಸ್ಥಾನ ಅದಲ್ಲ. read more »
By U R Ananthamurthy - Posted on November 5th, 2007
The state of Karnataka had never reached the low in morals that it has reached today politically. The two political parties which failed the coalition after twenty months surprised the ordinary simple people of Karnataka by the reasons they gave for their failure. But most people rightly asked: . Does anyone break a promise? read more »